ಲೋಕದಲ್ಲಿ ಪ್ರವಾದಿ ಮುಹಮ್ಮದ್ರ(ಸ) ಜೀವನ ಚರಿತ್ರೆಗೆ ಸಂಬಂಧಿಸಿ ರಚಿಸಲಾದಷ್ಟು ಕಿರು ಪುಸ್ತಕಗಳು ಮತ್ತು ಅನೇಕ ಸಂಪುಟಗಳುಳ್ಳ ಬೃಹತ್ ಗ್ರಂಥಗಳು ಬೇರೆ ಯಾರ ಬಗ್ಗೆಯೂ ರಚಿಸಲಾಗಿಲ್ಲವೆಂಬುದು ವಾಸ್ತವ. ಇಂದಿಗೂ ಈ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ ‘ಶತ್ರುವತ್ಸಲ’ ಎಂಬ ಈ ಕೃತಿಯಲ್ಲಿ ವೈರಿಗಳ ದ್ವೇಷ, ಕ್ರೋಧಭರಿತ ವರ್ತನೆ ಹಾಗೂ ಅದಕ್ಕೆ ಪ್ರವಾದಿವರ್ಯರ(ಸ) ಪ್ರೀತಿ ವಾತ್ಸಲ್ಯಗಳೇ ತುಂಬಿದ ಪ್ರತಿಕ್ರಿಯೆಯನ್ನು ಬಹಳ ಸೊಗಸಾಗಿ ಚಿತ್ರೀಕರಿಸಲಾಗಿದೆ. ಹಿರಿಯ ಸಾಹಿತಿಗಳೂ, ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇದರ ಅಧ್ಯಕ್ಷರೂ ಆದ ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವರವರು ಈ ಕೃತಿಗೆ ಬಹಳ ಅರ್ಥಪೂರ್ಣವಾದ ಮುನ್ನುಡಿ ಬರೆದು ಕೃತಿಯ ಗೌರವವನ್ನು ಹೆಚ್ಚಿಸಿದ್ದಾರೆ.
Ratings & Reviews
Login account to write review
Login0.00
Average Rating- (0.00)
