ಜನಾಂಗಗಳ ಉತ್ಥಾನ-ಪತನಗಳಲ್ಲಿ ಯುವಕರ ಪಾತ್ರ ನಿರ್ಣಾಯಕವಾಗಿರುತ್ತದೆ. ಲೋಕದ ಯಾವುದೇ ಆಂದೋಲನವು ಯುವ ಸಮೂಹದ ಬೆಂಬಲವಿಲ್ಲದೆ ಯಶಸ್ವಿಯಾಗಿಲ್ಲ. ಆಂದೋಲನಗಳ ಕಣ್ಣು ಯುವಕರ ಮೇಲಿರುತ್ತದೆ. ಅವರಿಂದ ಬಹಳಷ್ಟನ್ನು ಅವು ನಿರೀಕ್ಷಿಸುತ್ತವೆ. ಅವರು ಬಯಸಿದರೆ ದೇಶ ಮತ್ತು ಸಮಾಜವನ್ನು ಉನ್ನತಿಯ ಶಿಖರಕ್ಕೇರಿಸಬಹುದು. ತದ್ವಿರುದ್ಧವಾದರೆ ವಿನಾಶದ ಪಾತಾಳಕ್ಕೂ ದೂಡಬಹುದು. ಯುವ ಶಕ್ತಿಯನ್ನು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಲು, ಕೆಡುಕಿನ ನಿರ್ಮೂಲನ ಮತ್ತು ಒಳಿತಿನ ಸ್ಥಾಪನೆಗೆ ಪ್ರೇರೇಪಿಸಲು, ಅವರಲ್ಲಿ ನೈತಿಕ ಪ್ರಜ್ಞೆ ಮೂಡಿಸಲು ಈ ಪುಸ್ತಕವನ್ನು ಬರೆಯಲಾಗಿದೆ.
Ratings & Reviews
Login account to write review
Login0.00
Average Rating- (0.00)
