ಆಹಾರ ಸೇವನೆಯು ಮನುಷ್ಯನ ಮೂಲಭೂತ ಅವಶ್ಯಕತೆಯಾಗಿದೆ. ಆಹಾರವಿಲ್ಲದೆ ಆತ ಬದುಕಲಾರ. ಆಹಾರಕ್ಕಾಗಿ ಮಾನವನು ಅನಾದಿ ಕಾಲದಿಂದಲೇ ಬೇಟೆಯಾಡುವುದನ್ನು ರೂಢಿಸಿಕೊಂಡಿದ್ದನು. ಧಾರ್ಮಿಕ ಕಾರ್ಯಗಳಿಗಾಗಿಯೂ ಬಲಿ ನೀಡುವ ಉದ್ದೇಶದಿಂದ ಪ್ರಾಣಿ ಬಳಿ ನೀಡುವುದೂ ಪ್ರಾಚೀನ ಕಾಲದಿಂದಲೇ ನಡೆದು ಬಂದ ಸಂಪ್ರದಾಯ. ಆದರೆ ಇತ್ತೀಚಿಗಿನ ದಿನಗಳಲ್ಲಿ ಮಾಂಸಭಕ್ಷಣೆ, ಅದಕ್ಕಾಗಿ ಪ್ರಾಣಿ ವಧೆ ಮಾಡುವುದನ್ನು ತೀವ್ರವಾಗಿ ವಿರೋಧಿಸುವ ಒಂದು ಗುಂಪು ಈ ದೇಶದಲ್ಲಿ ಕಾರ್ಯವೆಸಗುತ್ತಿದೆ. ಪ್ರಾಣಿ ವಧೆಯನ್ನು ಕೇವಲ ಮುಸ್ಲಿಮರೇ ಮಾಡುತ್ತಿರುವರೇನೋ ಎಂಬಂತೆ ಬಿಂಬಿಸಲಾಗುತ್ತದೆ. ಅದಕ್ಕಾಗಿ ಈ ಶಕ್ತಿಗಳು ಗೋವಿಗೆ ಪೂಜನೀಯ ಸ್ಥಾನ ಕಲ್ಪಿಸಿ ಅದರ ಹೆಸರಲ್ಲಿ ಮನುಷ್ಯ-ಮನುಷ್ಯರ ಮಧ್ಯೆ ದ್ವೇಷ ಹುಟ್ಟಿಸಿ ತಮ್ಮ ಕಾರ್ಯ ಸಾಧಿಸ ಹೊರಟಿದ್ದಾರೆ.
ಆದುದರಿಂದ ಮಾಂಸಾಹಾರದ ಕುರಿತು ನಡೆಸುವಂತಹ ಅಪಪ್ರಚಾರಗಳ ಪೊಳ್ಳುತನ ಹಾಗೂ ಅದರಿಂದಾಗಿ ಜನ-ಮನದಲ್ಲಿ ಮೂಡುವ ಸಂದೇಹ, ತಪ್ಪು ಕಲ್ಪನೆಗಳನ್ನು ನೀಗಿಸುವ ಉದ್ದೇಶದಿಂದ ಬಿಜಾಪುರದ ಪ್ರಖ್ಯಾತ ನೇತ್ರತಜ್ಞ ಡಾ| ಎಮ್.ಜೆ.ಇನಾಮದಾರ ಅವರು "ಆಹಾರ-ಅಹಿಂಸೆ-ಧರ್ಮ" ಎಂಬ ಈ ಕೃತಿಯನ್ನು ರಚಿಸಿದ್ದಾರೆ.
Ratings & Reviews
Login account to write review
Login0.00
Average Rating- (0.00)
