ಮಾನವ ಹೃದಯಗಳನ್ನು ಜೋಡಿಸಲು ಅವರೊಳಗೆ ಪ್ರೇಮ, ಅನುಕಂಪ, ಸಹಾನುಭೂತಿ ಮತ್ತು ಪರಸ್ಪರ ಸಹಕಾರ ಮನೋಭಾವ ಬೆಳೆಸಲು ಅನೇಕ ಸಿದ್ಧಾಂತಗಳು ಜನ್ಮ ತಾಳಿವೆ. ಆದರೆ ಯಾವುದೂ ಯಶಸ್ಸು ಕಾಣಲಿಲ್ಲ. ಸಮಗ್ರ ಮಾನವೀಯತೆ ಮತ್ತು ಸಹೋದರತೆಯ ಕಲ್ಪನೆಯು ಮರೀಚಿಕೆಯಾಗಿಯೇ ಉಳಿದಿದೆ. ಇಂತಹ ಪರಿಸ್ಥಿತಿ ಅಲ್ಲ-ಇದಕ್ಕಿಂತಲೂ ಹೀನ ಪರಿಸ್ಥಿತಿಯಲ್ಲಿ ಜಗತ್ತು ಹದಿನಾಲ್ಕು ಶತಮಾನಗಳ ಹಿಂದೆ ಸಿಲುಕಿತ್ತು. ದೇವ ನಿರ್ಣಯಿತ ಸಿದ್ಧಾಂತವೊಂದು ಆ ಪರಿಸ್ಥಿತಿಯನ್ನು ಆಮೂಲಾಗ್ರವಾಗಿ ಬದಲಿಸಿತು. ‘ಮಾನವಕುಲದ ಏಕತೆ’ ಎಂಬ ಈ ಕಿರು ಹೊತ್ತಿಗೆಯು ಪ್ರಸ್ತುತ ವಾಸ್ತವಿಕತೆಗಳ ಕಡೆಗೆ ಗಮನ ಹರಿಸಲು ನಡೆಸಿದ ಒಂದು ಪ್ರಯತ್ನವಾಗಿದೆ.
Ratings & Reviews
Login account to write review
Login0.00
Average Rating- (0.00)
