ಈ ಲೋಕದಲ್ಲಿ ಕೆಲವರಿಗೆ ಎಲ್ಲ ರೀತಿಯ ಸೌಕರ್ಯ ಸೌಲಭ್ಯಗಳೂ ಲಭ್ಯವಾದರೆ ಇನ್ನು ಕೆಲವರು ಇದರಿಂದ ವಂಚಿತರಾಗಿದ್ದಾರೆ. ಉಳ್ಳವರು ಇಲ್ಲದವರ ಸೇವೆ ಮಾಡಬೇಕು. ಅವರಿಗೆ ಸಕಲ ಸೌಕರ್ಯಗಳನ್ನೂ ಒದಗಿಸಿ ಅವರ ಬದುಕನ್ನು ಹಸನುಗೊಳಿಸಬೇಕೆಂಬುದು ಕುರ್ಆನಿನ ಬೋಧನೆಯಾಗಿದೆ. ಅಲ್ಲಾಹನು ಕಣ್ಣು, ಕಿವಿ, ನಾಲಗೆ ಹಾಗೂ ದುಡಿಯುವ ಕೈಕಾಲುಗಳು, ಆಲೋಚಿಸುವ ಮನಮಸ್ತಿಷ್ಕಗಳು ಹಾಗೂ ಜೀವನದ ಸುಖ ಸಾಧನಗಳನ್ನು ನೀಡಲ್ಪಟ್ಟ ಮಾನವನು, ಜೀವನ ಸಾಧನಗಳಿಲ್ಲದೆ ಹಾಗೂ ದುಡಿಯುವ ಸಾಮರ್ಥ್ಯವಿಲ್ಲದವರನ್ನು ಭಿಕ್ಷೆ ಬೇಡಲು ಅಥವಾ ಆತ್ಮಹತ್ಯೆ ಮಾಡಲು ನಿರ್ಬಂಧಿಸುವಂತಹ ಅಸಹಾಯಕ ಸ್ಥಿತಿಯಲ್ಲಿ ಬಿಡದೆ ಅವನ ಜೀವನ ಸೌಕರ್ಯದ ಸಾಧನಗಳನ್ನು ಒದಗಿಸಿಕೊಡಬೇಕಾದುದು ಅವನ ಕರ್ತವ್ಯವಾಗಿದೆ. ಏಕೆಂದರೆ ಅವನಿಗೆ ಒದಗಿರುವ ಸಾಧನಗಳೆಲ್ಲ ದೇವನಿಂದ ದೊರೆತಿರುವುದರಿಂದ ಅವನಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ಕೃತಜ್ಞತೆ ಸಲ್ಲಿಸುವ ಒಂದು ವಿಧಾನವು ಅವನ ದಾಸರೊಂದಿಗೆ ಉತ್ತಮವಾಗಿ ವರ್ತಿಸುವುದು ಮತ್ತು ಅವಶ್ಯಾರ್ಥಿಗಳ ಸೇವೆ ಮಾಡುವುದಾಗಿದೆ. ದೇವನು ನೀಡಿದ ಎಲ್ಲ ಅನುಗ್ರಹಗಳಲ್ಲಿ ಅವನ ದಾಸರ ಪಾಲಿದೆ. ಅದನ್ನು ಪೂರೈಸದೆ ಅವನಿಗೆ ಕೃತಜ್ಞತೆ ಅರ್ಪಿಸುವುದು ಸಾಧ್ಯವಿಲ್ಲ.
‘ಸಮಾಜ ಸೇವೆ’ ಎಂಬ ಈ ಕೃತಿಯಲ್ಲಿ ಭಾರತದ ಸುಪ್ರಸಿದ್ಧ ವಿದ್ವಾಂಸರಾದ ಮೌಲಾನಾ ಸಯ್ಯದ್ ಜಲಾಲುದ್ದೀನ್ ಉಮರಿಯವರು ಸೃಷ್ಟಿ ಸೇವೆಯ ಕುರಿತು ವಿಸ್ತಾರವಾಗಿ ಚರ್ಚಿಸಿ, ಸೇವೆಯ ಎಲ್ಲ ಮಗ್ಗುಲುಗಳನ್ನೂ ಅನಾವರಣಗೊಳಿಸಿದ್ದಾರೆ.
Ratings & Reviews
Login account to write review
Login0.00
Average Rating- (0.00)
